ಹುಟ್ಟಿದ ಮೂರು ಗಳಿಗೆಯಲಿ
ಬರುತ್ತಾನೆ ತುಂಟ
ಬಡವನಿಗೆಂತೋ ಹಾಗೇನೆ
ಧನಿಕನಿಗೂ ಅವ ನೆಂಟ
ಭವಿಷ್ಯ ಎಂಬುದು ಬಳಪದ ಕಡ್ಡಿ
ಹಣೆ ಅವನ ಸ್ಲೇಟು
ಗೀಚುವನಲ್ಲಿ ಅಡ್ಡಾದಿಡ್ಡಿ
ಅಕ್ಷರ, ಚಿತ್ರ, ಗೀಟು
ಬಡವನ ನಾಲಿಗೆಗೂ ತಾಗಿಸುವನು
ಕೆಲವೊಮ್ಮೆ ಹನಿಜೇನು
ಧನಿಕನ ಮೀಸೆಗು ಮಣ್ಣು ಮೆತ್ತುವನು
ನೆಟ್ಟಗಾಗಿಸುವ ಗೂನು
ಹರಿಶ್ಚಂದ್ರನಿಗೆ ಮಸಣ
ಶಕುಂತಲೆಗೆ ವಿರಹ
ಸೀತೆಗೆ ಕಾಡು - ಎಲ್ಲಕು ಕಾರಣ
ಅವನು ಬರೆದ ಹಣೆಬರಹ.
(ನನ್ನ "ಮೃಗ ಚೆಲುವೆ" ನಾಟಕದ ಹಾಡು)
No comments:
Post a Comment