Friday, May 28, 2010

ಯಶೋಧರ ಸ್ವಗತ



ಹಾ! -
ದರ ನಡೆದುಹೋಯಿತು ನನ್ನೆದುರಲ್ಲೆ
ಕಣ್ಣೆದುರಲ್ಲೆ, ಬಾಳೆದುರಲ್ಲೆ, ವರ್ಷಗಳ
ಖ್ಖಂಡ ದಾಂಪತ್ಯದೆದುರಲ್ಲೆ -

ಒರೆಗಳೆದ ಕತ್ತಿ
ಹಿರಿದೆತ್ತಿ ತರಿಯಲೆ ಮಾಳವಸಿರಿ
ತುರಿಸಿಕೊಳ್ಳಲೇ ಮಧ್ಯ ಮಜಘನ್ಯ ಬರಿಸಿಕೊಳ್ಳಲು
ಕತ್ತರಿಸಿ ಒಗೆಯಲೆ ಒಡ್ಡಿದ ತೊಡೆ?

ಬಗೆ ಬಗೆ ಬಗೆ
ದು ಬಿಡಲೆ ತಿರ್ಯಗ್ಯೋನಿಗಳ
ಭವ ಹೊಗಿಸಿದ ಗಂಟು
ಬಿದ್ದವನ ರಸಿಕೆಯ

ಮಥಿಸಿ ಬಿಡಲೆ?
ಹಾ! ಪರವಶವು ಎನಲೆ?



ನಿನ್ನೊಳಗು ಕಾಣೆ ಕನ್ನಡಿಯ ಹಾವೆ,
ಎತ್ತ ಕಣ್ಣು, ಎಷ್ಟು ಮುಖ?
ಎಷ್ಟು ದ್ವಾರದ ಹುತ್ತ, ಯಾವ ರಚನೆ,
ಯಾವ ಕಡೆ ಹೇಗೆ ಸುಖ?

ಬಾಗಿಲಿಲ್ಲದ ಕೋಟೆ ಒಳಗೆ ಬಾಗಿಲೆ ಎಲ್ಲ
ಏಳು ಮಾಳಿಗೆ ಕೆಳಗೆ ಬಚ್ಚಲ ಮನೆ
ಹೊಳೆವ ಚಿನ್ನದ ಕಿರೀಟದೊಳಗೆ ಬೆಳ್ಳಿಯ ಸರಿಗೆ
ಸುಳ್ಳು ಬಸಿರಿನ ಕಳ್ಳ ಹಸಿಕಾಮನೆ

ಕಿಸುರುಗಣ್ಣಿನ ಡೊಂಕುಬಸಿರು ಒದ್ದರೆ ಮರ್ಮ
ಹುಸಿನಗುವ ಕಿಸಬಾಯಿ ಊರು
ಒರಲೆ ಹೂ ಬಿಟ್ಟ ದೊಗರು ಬೊಡ್ಡೆಯ ಕೆಳಗೆ
ಅಲೆಮಾರಿ ಕಾಡುಬೇರು

ಹುಟ್ಟು ನಿಂತರೆ ಮುಳುಗೆ? ಮುಳುಗಿದರೆ ಹುಟ್ಟು
ಪರದೆ ಬಿದ್ದರೆ ಅಂಕ ಕೊನೆ, ಮೊದಲು
ನೇಪಥ್ಯ ಕಂಡೀತು ಪರದೆ ಎದ್ದರೆ, ಇಣುಕಿದರೆ
ರಾವಣ ಸೀರೆಯುಡಿಸಿದ ಸಾಧ್ವಿ ಸೀತೆ

ನಿಂತರೆ ನಿಂತಂತೆ ಸೀತೆ ಪೊರೆಕಳಚಿ
ಕೊರಡು : ಉರಿದೇನು, ಚಿಗುರಿಯೇನೆ?
ತಬ್ಬಲಿಗು ಬೇಕೆ ಬಲಿ ಬೇರೆ? ಕೇಳುತ್ತಿವೆ -
ವಜ್ರದೊರೆ, ಮೊಂಡುಗತ್ತಿ.

No comments:

Post a Comment